" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "

" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "



Monday, July 9, 2012

ಬೆಂದಕಾಳೂರಿನ ಭೊಂಬಾಟ್ ಕೋಟೆ

ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಅವದಿಯಲ್ಲಿ ಬೆಂಗಳೂರಿನ ಹೃದಯ ಬಾಗದಲ್ಲಿ ಮಣ್ಣಿನ ಕೋಟೆಯನ್ನು ನಿರ್ಮಿಸಿದರು, ಕ್ರಿ.ಶ. ೧೭೬೧ರಲ್ಲಿ ಹೈದರ್-ಅಲಿ ಇದರ ಜೀರ್ಣೋದ್ಧಾರ ಮಾಡಿ ಕಲ್ಲಿನ ಕೋಟೆಯನ್ನಾಗಿ ಪರಿವರ್ತಿಸಿದರು.



ಬ್ರಿಟೀಷ್-ಈಸ್ಟ್-ಇಂಡಿಯ-ಕಂಪನಿಯ ಪ್ರತಿನಿಧಿಯಾದ ಲಾರ್ಡ್-ಕಾರ್ನ್-ವಾಲೀಸ್, ೨೧-ಮಾರ್ಚ್-೧೭೯೧ರಂದು ಟಿಪ್ಪು ಸುಲ್ತಾನನಿಂದ ವಶಕ್ಕೆ ಪಡೆಯುತ್ತಾನೆ, ಅದು ಮೂರನೇ ಮೈಸೂರು ಯುದ್ದದ ಸಮಯ (೧೭೯೦-೧೭೯೨).



ಈಗ ಈ ಕೋಟೆಯೂ ಸಂಪೂರ್ಣವಾಗಿ ನಾಶವಾಗಿದ್ದು ದೆಹಲಿಯ ಹೆಬ್ಬಾಗಿಲು ಮಾತ್ರ ಉಳಿದಿದೆ.



ಬೆಂದಕಾಳೂರಿನ ಭೊಂಬಾಟ್ ಕೋಟೆ ಈಗ ಬರಿ ನೆನಪು. ಆ ನೆನಪಿನ ಚಿತ್ರಗಳು ಮುಂದಿನ ಜನಾಂಗಕ್ಕೆ ಕೇವಲ ಕಥೆಗಳಾಗದಿರಲಿ. ಅದಕ್ಕಾಗಿಯೆ ನಮ್ಮ ಹೆಮ್ಮೆಯ ಕರುನಾಡ ಸ್ಮಾರಕಗಳನ್ನು ರಕ್ಷಿಸುವ ಹೋಣೆ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ನಮ್ಮ ನಮ್ಮ ಊರು-ಕೇರಿಗಳಲ್ಲಿ ಈ ಕೆಲಸ ಪ್ರಾರಂಭವಾಗಬೇಕು.




ಕೆಂಪೇಗೌಡರ ಕನಸಿನ ಕೋಟೆಯನ್ನ ಒಮ್ಮೆ ಸುತ್ತು ಹಾಕಿ ಬರೊಣ.

೧) ಬೆಂಗಳೂರು ಕೋಟೆಯ ಹೆಬ್ಬಾಗಿಲು
 


೨) ಬೆಂಗಳೂರು ಕೋಟೆಯ ದೆಹಲಿ ಹೆಬ್ಬಾಗಿಲು



೩) ಕ್ರಿ.ಶ. ೧೮೬೦ ರಲ್ಲಿ ನಿಕೊಲಸ್-ಬ್ರೋಸ್ ಎನ್ನುವ ಬ್ರಿಟೀಷ್ ವ್ಯೆಕ್ತಿ (ಭಾವ ಚಿತ್ರ) ಕಂಡ ಬೆಂಗಳೂರು ಕೋಟೆ.



೪) ಬೆಂಗಳೂರು ಕೋಟೆಯ ಈಗಿನ ಒಳಾಂಗಣ


೫) ಬೆಂಗಳೂರು ಕೋಟೆಯಲ್ಲಿನ ಗಣಪತಿ ದೇವಾಲಯ



೬) ಬೆಂಗಳೂರು ಕೋಟೆಯ ದೆಹಲಿ ಹೆಬ್ಬಾಗಿಲು (ಈಗಿನ ಚಿತ್ರಣ)






ಹೆಚ್ಛಿನ ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.

http://en.wikipedia.org/wiki/Bangalore_Fort