" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "

" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "



Sunday, July 18, 2010

ಸ್ಪರ್ಧೆ ...???!!!







ಎಲ್ಲ ಕನ್ನಡ ಬಂಧುಗಳಿಗೆ ನಮಸ್ತೆ,


ಇದು ಸ್ಪರ್ದಾತ್ಮಕ ಯುಗ, ಕ್ಷಣ ಕ್ಷಣಕ್ಕೂ ಸ್ಪರ್ಧೆ ...???!!!

ಸ್ಪರ್ಧಾ ಪ್ರಪಂಚದಲ್ಲಿ ಎಂಟೆದೆಯ ಭಂಟರಾದ ಕನ್ನಡಿಗರು ಮುನ್ನುಗ್ಗಿ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿ, ಕರುನಾಡಿನ ಕೀರ್ತಿಯನ್ನು ಎಲ್ಲೆಡೆ ಪಸರಿಸಿ, ಹಡೆದ ತಂದೆತಾಯಿಗಳಿಗೆ, ಜನ್ಮ ಕೊಟ್ಟ ಈ ಕರುನಾಡಿಗೆ ಕೀರ್ತಿ ತರುವ ನಿಟ್ಟಿನಲ್ಲಿ, ಎಲ್ಲ ಕನ್ನಡಿಗ ಸ್ಪರ್ದಾ ವೀರರು ಒಟ್ಟಿಗೆ ಸೇರಿ ಒಂದಸ್ಟು ಆಪ್ತವಾದ ಮಾತು - ಕಥೆ , ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗಿನ ವಿಚಾರ ವಿನಿಮಯ, ಚಿಂತನ, ಮಂಥನ ನಡೆಸಲು ಅನುವಾಗಲೆಂಬ ಆಶಯದಿಂದ ಈ ಸಮುದಾಯದ ಉಗಮ.

ಗ್ರಾಮೀಣಾಭಿವ್ರುದ್ದಿ ಮೂಲಖ ಸದೃಢ ಭಾರತದ ನಿರ್ಮಾಣದ ಕನಸು ಹೊತ್ತ , ಯುವ ಸಮಾಜಮುಖಿ ಸೇವಾ ಮನಸ್ಸುಗಳ " ಚುಕ್ಕಿ ಸಂಸ್ಥೆ " ಯ ಮುಖ್ಯ ಆಶಯ ಗ್ರಾಮೀಣ ಭಾಗದ ಯುವ ಸಂಪನ್ಮೂಲವನ್ನು ಬಲಪಡಿಸುವುದು. ಇದಕ್ಕೆಲ್ಲ ಈ ಓಡುತ್ತಿರುವ ಕಾಲದಲ್ಲಿ " ಜಾಗೃತಿ ಮತ್ತು ಮಾಹಿತಿ " ಅವಶ್ಯಕತೆ ಇದೆ . ಅದಕ್ಕಾಗಿಯೇ ಕನ್ನಡಿಗರ ಈ ಅಂತರ್ಜಾಲ ತಾಣ ಸೃಷ್ಟಿ ಯಾಗಿದೆ.

ನಿಮಗೆ ತಿಳಿದಿರುವ ಮಾಹಿತಿಗಳನ್ನು kannadaspardayodharu @ gmail.com ಅಥವಾ chukkisamsthe@ gmail ಮಿಂಚೆ ಗೆ ಕಳುಹಿಸಿ . ಜ್ಞಾನವನ್ನು ಹಂಚಿಕೊಳ್ಳೋಣ, ಮಾಹಿತಿ ತಿಳಿದು ಜಾಗೃತರಾಗೋಣ.

ಕನ್ನಡ ಉಸಿರಾಗಲಿ, ಕರುನಾಡು ಹಸಿರಾಗಲಿ ...

ನಮ್ಮ ಎಲ್ಲ ಕನ್ನಡ ಗೆಳೆಯ - ಗೆಳತಿಯರು ಇದನ್ನು ಸದುಪಯೋಗ ಪಡಿಸಿಕೊಳ್ಳುವರೆಂಬ ಆಶಯದೊಂದಿಗೆ,

ನಿಮ್ಮ,

ಚುಕ್ಕಿ ಸಂಸ್ಥೆ (ನೋ )